Monday, July 26, 2010

ಬಿಜೀ ಬೆಂಗ್ಳೂರು

"ಹಲೋ.....ಹಲೋ....."
"ನೀನು ಸತ್ತೆಯೇನು?"
"ಇಲ್ಲ ಇಲ್ಲ, ರೇಲ್ವೆ ಸ್ಟೇಶನ್ನಿನ ಕಡೆ ಹೋಗುತ್ತಿದ್ದೇನೆ, ಹೆಂಡ್ತಿ ಬರ್ತಾಳಂತೆ"
"ಅಯ್ಯೋ ಸತ್ತೆ ನೀನು"
"ಇಲ್ಲವೋ ಮಹರಾಯ"
"ಸರಿ ಹಾಗಾದರೆ, ಮಾತನಾಡು"
"ನಾನೀಗ ಬೆಂಗಳೊರಿನ ಸೌತೆಂಡ್ ಸರ್ಕಲ್ಲಿನ ನಿಡುಗಾಳಿಯಲ್ಲಿ ಮೊಬೈಲ್ ಹಿಡಿದು ಡಬಲ್ ರೋಡಿನಲ್ಲಿ ಬನಶಂಕರಿಯ ಕಡೆಗೆ ನನಗೆ ಇದಿರಾಗಿ ಬರುವ ಗಾಡಿಗಳ ವೇಗವನ್ನು ಮನಸಲ್ಲೆ ಲೆಕ್ಕ ಹಾಕುತ್ತ ಮುಂದೆ ಮುಂದೆ ಸಾಗುತ್ತಿರುವ ಸಮಯದಲ್ಲಿ ವಯಸ್ಸಾದ, ಮದುವೆಯಾದ ಮುದುಕಿಯೊಬ್ಬಳು ಢಿಕ್ಕಿ ಹೊಡೆದು ಕಿವಿಗೆ ಕಚ್ಚಿದ್ದ ಮೊಬೈಲು ಮಾತ್ರ ಕೈಯಲ್ಲೇ ಇದ್ದು, ಬಲಗೈಲಿ ಗಟ್ಟಿಯಾಗಿ ಹಿಡಿದಿದ್ದ ಅದರ ಕರಿಯ ಕವರು ಕೆಳಗೆ ಬಿದ್ದು, ಅದರ ಮೇಲೆ ಆ ಹೆಂಗಸು ತನ್ನ ಆನೆ ಗಾತ್ರದ ಕಾಲನೂರಿ ಕೊಳೆತ ಮಾವಿನ ಹಣ್ಣಿನ ಮೆಲೆ ಗಂಡಸೊಬ್ಬ ಪೇಟೆಯಲ್ಲಿ ಕಾಲನಿಟ್ಟಂತೇ ಹೀ..... ಎಂದು ಅಲವತ್ತುಕೊಂಡು 'ಸೋರಿ' ಎಂದು ತನ್ನ ಬಣ್ಣ ಹಚ್ಚಿದ ತುಟಿಯ ಕಿಸಿದು ನುಡಿದು ತಿರುಗಿ ಅವಳ ಪಾಡಿಗೆ  ಹೊರಟಾಗ, ನಾನೇ ಬಿದ್ದ ಮೊಬೈಲ್ ಕವರನ್ನು ಹೆಕ್ಕಿಕೊಂಡು ನನ್ನ ದಾರಿಯ  ಹಿಡಿದರೆ ತಾನು ಬರಲೊಲ್ಲೆ ಎಂದು ಹೇಳಿ ಹಿಡಿದ ಕೈ ಸಡಿಲಾಗಿ ಗಾಳಿಗೆ ಹಾರಿ ಮತ್ತೆ ಸೌತೆಂಡ್ ಸರ್ಕಲ್ಲಿನ ಕಡೆ ಹೊರಟಾಗ, ನನಗದನ್ನು ಹಿಡಿಯಲಾಗದೇ ರಸ್ತೆಯಲಿ ಬಿದ್ದು ಸ್ಕೂಟರಿನ ಚಕ್ರದಡಿಗಾಗಿ ಮೊದಲು, ಆಮೇಲೆ ಬೀಎಮ್ಟೀಸಿ ಬಸ್ಸಿನ ಟಾಯರಿನಡಿಯಲ್ಲಿ ಸಿಕ್ಕು ನಮ್ಮೂರಿನ ಜಟ್ಟಿ ಗೌಡ ಮುಸ್ಸಂಜೆಯಲಿ ಕುಡಿದು ತೃಪ್ತಿಯಾಗದೇ ಕೊನೆಗೆ ಚೀಪಿ ಬಿಸಾಕಿದ ಸಾರಾಯಿ ಕೊಟ್ಟೆಯಂತಾಗಿ ಹೋದದ್ದನ್ನು ನೋಡುತ್ತಿರಲು, ನಿನ್ನೊಂದಿಗೆ ಮಾತನಾಡುವುದನ್ನೂ ನಿಲ್ಲಿಸಿ, ಇದೇ ಪಾರ್ಕಿನ  ಮೂಲೆಯಲ್ಲಿರುವ ಬೆಂಚಿನ ಮೇಲೆ ಕುಳಿತು ಗಳಗಳನೆ ಅತ್ತು ಸುಧಾರಿಸಿಕೊಂಡು ಕೊನೆಗೆ ಬನಶಂಕರಿಯ 2ನೇ ಸ್ಟೇಜಿನಲ್ಲಿರುವ 'ಸ್ವರ್ಗ' ಬಾರಿಗೆ ಹೋಗುವ ಅನ್ನಿಸ್ತಿದೆ........."
"ಸಾಯಿ ನೀನು........."
ಫೋನ್ ಕಟ್ಟಾಯಿತು.

No comments:

Post a Comment